spot_img

ಅಮ್ಮನ ನೆರವು ವಿದ್ಯಾರ್ಥಿವೇತನ ವಿತರಣೆ: 90%ಕ್ಕೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು

Date:

spot_img

ಕಾರ್ಕಳ : ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹತ್ತನೇ ತರಗತಿ ಮತ್ತು ಪಿಯುಸಿ ಪಾಸಾದ 90 ಶೇಕಡಾಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವು ಟ್ರಸ್ಟಿನ ಅಧ್ಯಕ್ಷ ಅವಿನಾಶ್ ವಿ ಶೆಟ್ಟಿಯವರ ನೇತೃತ್ವದಲ್ಲಿ ಕಾರ್ಕಳ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಇಲ್ಲಿ ನಡೆಯಿತು.

ವಿದ್ಯಾಭಿಮಾನಿಗಳೂ ಹಿರಿಯರೂ ಆದ ವೈಕುಂಟ ಶೆಣೈ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಆನಂದನಾಯಕ್ ರವರು ವಿದ್ಯಾರ್ಥಿಗಳು ಮುಂದಿನ ವರ್ಷ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿವೇತನವನ್ನು ಪಡೆಯುವಲ್ಲಿ ಪ್ರಯತ್ನಿಸಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಕಾರ್ಕಳ ರೋಟರಿ ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮಾತನಾಡುತ್ತಾ ಅವಿನಾಶ್ ವಿ ಶೆಟ್ಟಿಯವರು ತನ್ನ ಸಣ್ಣ ಪ್ರಾಯದಲ್ಲೇ ಇಂಥ ಉತ್ತಮ ಕಾರ್ಯಕ್ರಮಗಳನ್ನು ಅಮ್ಮನಿಂದ ಬಂದ ಉತ್ತಮ ಸಂಸ್ಕಾರಗಳೇ ಕಾರಣ. ಜೊತೆಗೆ ಅವರು ಓರ್ವ ಉತ್ತಮ ದೇಶಭಕ್ತಿಯನ್ನು ಮೈಗೂಡಿಸಿಕೊಂಡವರು ಎಂದರು.

ಡಾ. ರವಿರಾಜ್ ಶೆಟ್ಟಿ, ಮಸ್ಕತ್ತಿನ ಉದ್ಯಮಿ ರಾಜೇಂದ್ರ ಶೆಟ್ಟಿ ನಲ್ಲೂರು , ಸೌದಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರ್ ಆಗಿರುವ ಚೇತನ್ ಕುಮಾರ್, ಉದ್ಯಮಿ ಸುಧಾಕರ ಶೆಟ್ಟಿ,ಸಮಾಜ ಸೇವಕ ಜೇಸಿ ಸಮದ್ ಖಾನ್ , ಶ್ರೀ ರಾಮಪ್ಪ ಎಜುಕೇಶನ್ ಟ್ರಸ್ಟಿನ ಅಧ್ಯಕ್ಷ ಶ್ರೀಧರ್ ಸುವರ್ಣ, ಕಾರ್ಕಳ ಜೇಸಿ ಸಂಸ್ಥೆಯ ಅಧ್ಯಕ್ಷೆ ಶ್ವೇತಾ ಜೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ 10ನೇ ತರಗತಿ ಪಾಸಾದ 22 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಉನ್ನತ ಶಿಕ್ಷಣ ಪಡೆಯುತ್ತಿರುವ 4 ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡಲಾಯಿತು. ಸಂಗೀತ ಶಿಕ್ಷಕ ಕೃಷ್ಣಪ್ಪ ಮತ್ತು ವಿದ್ಯಾರ್ಥಿಗಳ ತಂಡ ಪ್ರಾರ್ಥಿಸಿದರು. ಕಾರ್ಯಕ್ರಮ ನಿರೂಪಿಸಿದ ಟ್ರಸ್ಟಿನ ಮಾರ್ಗದರ್ಶಕ ವಸಂತ್ ಎಂ. ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಭಾರ ಮುಖ್ಯ ಶಿಕ್ಷಕಿ ವೇದಾವತಿ ವಂದಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉಡುಪಿ: ಭಾರಿ ಮಳೆ ಹಿನ್ನೆಲೆ, ಜುಲೈ 17ರಂದು ಶಾಲಾ-ಅಂಗನವಾಡಿಗಳಿಗೆ ರಜೆ ಘೋಷಣೆ

ಕರಾವಳಿ ಜಿಲ್ಲೆ ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯು ಜನಜೀವನಕ್ಕೆ ಅಡ್ಡಿಯಾಗುತ್ತಿದ್ದು, ಮುಂಗಾರು ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ಜಿಲ್ಲಾಡಳಿತ ಮಹತ್ವದ ನಿರ್ಧಾರ ಕೈಗೊಂಡಿದೆ.

NVIDIAಗೆ ಬ್ರಾಡ್‌ಕಾಮ್ ಸವಾಲು: ಹೊಸ ಟೊಮಾಹಾಕ್ ಅಲ್ಟ್ರಾ ನೆಟ್‌ವರ್ಕಿಂಗ್ ಚಿಪ್ ಬಿಡುಗಡೆ

ಬ್ರಾಡ್‌ಕಾಮ್ಸ್ (AVGO.O), ಮಂಗಳವಾರ ಹೊಸ ಟ್ಯಾಬ್ ಚಿಪ್ ಘಟಕವನ್ನು ಅನಾವರಣಗೊಳಿಸಿದೆ, ಇದು ಕೃತಕ ಬುದ್ಧಿಮತ್ತೆ ಡೇಟಾ ಕ್ರಂಚಿಂಗ್ ಅನ್ನು ವೇಗಗೊಳಿಸುವ ಗುರಿಯನ್ನು ಹೊಂದಿರುವ ಹೊಸ ನೆಟ್‌ವರ್ಕಿಂಗ್ ಪ್ರೊಸೆಸರ್ ಆಗಿದೆ

ಕಿವಿ ಹಣ್ಣು: ಆರೋಗ್ಯದ ಅಮೃತ, ತಪ್ಪದೇ ಸೇವಿಸಿ!!

ಕಿವಿ ಹಣ್ಣು, ಚೀನಾದ ಮಣ್ಣಿನಿಂದ ಹುಟ್ಟಿ, ನ್ಯೂಜಿಲೆಂಡ್‌ನಲ್ಲಿ ಜಾಗತಿಕವಾಗಿ ಬೆಳೆದು ನಿಂತಿರುವ ಒಂದು ಪುಟ್ಟ ಪೌಷ್ಟಿಕ ನಿಧಿ

ನೀರೆ ಗ್ರಾಮದಲ್ಲಿ ಪೊಲೀಸ್ ಜಾಗೃತಿ ಸಭೆ: ಸೈಬರ್ ಕ್ರೈಂ, 112 ಸಹಾಯವಾಣಿ ಬಗ್ಗೆ ಮಾಹಿತಿ ನೀಡಿದ ಉಮೇಶ್ ನಾಯಕ್

ಕಾರ್ಕಳ ನಗರ ಪೊಲೀಸ್ ಠಾಣೆಯ ಮುಖ್ಯ ಆರಕ್ಷಕರಾದ (ಹೆಡ್ ಕಾನ್‌ಸ್ಟೇಬಲ್) ಉಮೇಶ್ ನಾಯಕ್ ಅವರು ನೀರೆ ಗ್ರಾಮದ ಬೀಟ್ ಪೊಲೀಸ್ ಆಗಿ, ಹಗಲು ಗ್ರಾಮ ಗಸ್ತು ಸಮಯದಲ್ಲಿ ಮಹತ್ವದ ಕಾರ್ಯಕ್ರಮವೊಂದನ್ನು ನಡೆಸಿದರು.