
ಕಾರ್ಕಳ ತಾಲೂಕಿನ ಐತಿಹಾಸಿಕ ಪ್ರಸಿದ್ಧ ಅಜೆಕಾರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ 2014 ರಲ್ಲಿ ನಿರ್ಮಿಸಲಾಗಿದ್ದ ಈ ಧ್ವಜಸ್ತಂಭವು ಇತ್ತೀಚಿನ ದಿನಗಳಲ್ಲಿ ತಾಂತ್ರಿಕ ಸಮಸ್ಯೆಗೆ ಒಳಗಾಗಿದ್ದು, ಸ್ತಂಭದ ಮೇಲ್ಭಾಗದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಮಳೆಗಾಲದ ಸಂದರ್ಭದಲ್ಲಿ ನೀರು ತಾಮ್ರದ ಕವಚದೊಳಗೆ ಜಿನುಗಿದ್ದರಿಂದ, ಒಳಗಿದ್ದ ಎಳ್ಳು ಮತ್ತು ಸಾಸಿವೆ ಮಿಶ್ರಣವು ಕೊಳೆತು ನೀರು ಹೊರಗೆ ಬರುತಿದ್ದು. ಈ ಹಿನ್ನೆಲೆಯಲ್ಲಿ ಭಕ್ತರ ಸಹಕಾರದೊಂದಿಗೆ ಧ್ವಜಸ್ತಂಭವನ್ನು ನವೀಕರಿಸಲು ಆಡಳಿತ ಮಂಡಳಿ ನಿರ್ಧರಿಸಿದೆ.
ಈ ಪವಿತ್ರ ಕಾರ್ಯಕ್ಕಾಗಿ ಸರಿಸುಮಾರು 4 ಕ್ವಿಂಟಾಲ್ ಉತ್ತಮ ಗುಣಮಟ್ಟದ ಕಪ್ಪು ಎಳ್ಳು ಹಾಗೂ 1 ಕ್ವಿಂಟಾಲ್ ಸಾಸಿವೆಯ ಅವಶ್ಯಕತೆಯಿದೆ. ಈ ಪುಣ್ಯ ಕಾರ್ಯದಲ್ಲಿ ಭಾಗಿಯಾಗಲು ಇಚ್ಛಿಸುವ ಭಕ್ತರು 5 ಕೆಜಿ ಅಥವಾ 10 ಕೆಜಿ ಪ್ರಮಾಣದಲ್ಲಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಎಳ್ಳು ಮತ್ತು ಸಾಸಿವೆಯನ್ನು ದೇಣಿಗೆಯಾಗಿ ನೀಡಬಹುದಾಗಿದೆ. ವಸ್ತು ರೂಪದಲ್ಲಿ ನೀಡಲು ಸಾಧ್ಯವಾಗದವರು ಈ ಕಾರ್ಯಕ್ಕೆ ಧನಸಹಾಯವನ್ನೂ ಮಾಡಬಹುದು. ಆಸಕ್ತರು ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯ ಒಳಗೆ ದೇವಸ್ಥಾನದ ಕಚೇರಿಗೆ ಭೇಟಿ ನೀಡಿ ಅಧಿಕೃತ ರಸೀದಿಯನ್ನು ಪಡೆದುಕೊಳ್ಳುವಂತೆ ವಿನಂತಿಸಲಾಗಿದೆ.



































