spot_img

ಅಹಮದಾಬಾದ್ ವಿಮಾನ ದುರಂತದ ಕೆಲವು ಗಂಟೆಗಳ ಮೊದಲು ಮಿಡ್‌ಡೇನಲ್ಲಿ ಪ್ರಕಟವಾದ ಜಾಹೀರಾತು ವಿವಾದಕ್ಕೆ ದಾರಿ

Date:

ಅಹ್ಮದಾಬಾದ್ : ಗುಜರಾತಿ ಭಾಷೆಯ ಜನಪ್ರಿಯ ದೈನಿಕ ‘ಮಿಡ್‌ಡೇ’ ಪತ್ರಿಕೆಯ ಜೂನ್ 12ರ ಮೊದಲ ಪುಟದಲ್ಲಿ ಪ್ರಕಟವಾದ ಒಂದು ಜಾಹೀರಾತು ಈಗ ತೀವ್ರ ವಿವಾದಕ್ಕೀಡಾಗಿದೆ. ಅಹ್ಮದಾಬಾದ್‌ನ ಕಿಡ್ ಝಾನಿಯಾ ಮನರಂಜನಾ ಕೇಂದ್ರದ ಜಾಹೀರಾತು ಇದಾಗಿತ್ತು. ಜೂನ್ 13ರಿಂದ 15ರವರೆಗೆ ನಡೆಯುವ ತಂದೆಯಂದಿರ ದಿನಾಚರಣೆ ಸಂದರ್ಭದಲ್ಲಿ ಪ್ರಕಟಿಸಿದ ಈ ಜಾಹೀರಾತಿನಲ್ಲಿ, ಒಂದು ವಿಮಾನ ಕೆಳಮಟ್ಟದಲ್ಲಿ ಹಾರುತ್ತಾ, ನಗರವೊಂದರ ಕಟ್ಟಡದ ಮೇಲ್ಭಾಗದಲ್ಲಿ ಲ್ಯಾಂಡ್ ಆಗುತ್ತಿರುವ ದೃಶ್ಯವಿತ್ತು.

ಈ ಜಾಹೀರಾತಿನ ಉದ್ದೇಶ, ಕಿಡ್ ಝಾನಿಯಾದ ವಿಮಾನಯಾನ ಥೀಮ್‌ನ ಅನುಭವಗಳ ಬಗ್ಗೆ ಮಕ್ಕಳಿಗೆ ಪೈಲಟ್ ಅಥವಾ ಕ್ಯಾಬಿನ್ ಸಿಬ್ಬಂದಿಯಾಗಿ ಪಾತ್ರವಹಿಸಲು ಅವಕಾಶ ನೀಡುವುದೆಂಬುದನ್ನು ವಿವರಿಸುವಂತಿತ್ತು. ಆದರೆ, ಈ ಚಿತ್ರ ಓದುಗರಿಗೆ ತಲುಪಿದ ಕೆಲವೇ ಗಂಟೆಗಳಲ್ಲೇ ಅದೇ ದಿನ ಅಹ್ಮದಾಬಾದ್‌ನಲ್ಲಿ ನೈಜ ದುರಂತ ನಡೆದಿದೆ.

ಏರ್ ಇಂಡಿಯಾದ ಎಐ171 ಬೋಯಿಂಗ್ ವಿಮಾನವು, ಸರ್ದಾರ್ ವಲ್ಲಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ ಪತನಗೊಂಡು, ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿತು. ಈ ದುರಂತದ ದೃಶ್ಯಗಳಲ್ಲಿ, ವಿಮಾನದ ಹಿಂಭಾಗ ಕಟ್ಟಡದ ಮೇಲೆ ಹರಡಿರುವ ರೀತಿಯು, ಮಿಡ್‌ಡೇ ಪತ್ರಿಕೆಯಲ್ಲಿ ಪ್ರಕಟವಾದ ಕಿಡ್ ಝಾನಿಯಾ ಜಾಹೀರಾತಿನ ಚಿತ್ರಕ್ಕೆ ಬಹಳಷ್ಟು ಹೋಲಿಕೆಯಾಗುತ್ತಿತ್ತು.

ಈ ಸಾದೃಶತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಮತ್ತು ಭಾವನಾತ್ಮಕ ಪ್ರತಿಕ್ರಿಯೆಗಳಿಗೆ ಕಾರಣವಾಗಿದೆ. ಕೆಲವು ಮಂದಿ ಇದನ್ನು “ಅಪಶಕುನದ ಸೂಚನೆ” ಎನ್ನುತ್ತಿದರೆ, ಇತರರು ಇದನ್ನು “ದುರ್ಘಟನೆಯ ವೈಭವೀಕರಿಸಿದ ಚಿತ್ರಣ” ಎಂದು ನಿಂದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಜಾಹೀರಾತು ಕಂಪನಿಯು ಅಥವಾ ಪತ್ರಿಕೆಯು ಯಾವುದೇ ಸ್ಪಷ್ಟನೆ ನೀಡಿಲ್ಲ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ವೃದ್ಧರ ವಿರುದ್ಧದ ದೌರ್ಜನ್ಯ ಜಾಗೃತಿ ದಿನ

ಪ್ರತಿ ವರ್ಷ ಜೂನ್ 15 ರಂದು ವಿಶ್ವದಾದ್ಯಂತ ವಿಶ್ವ ವೃದ್ಧರ ವಿರುದ್ಧದ ದೌರ್ಜನ್ಯ ಜಾಗೃತಿ ದಿನ (World Elder Abuse Awareness Day – WEAAD) ಅನ್ನು ಆಚರಿಸಲಾಗುತ್ತದೆ

ಕಾರ್ಕಳ ಬಿಜೆಪಿ ವತಿಯಿಂದ ಜೂನ್ 16ರಂದು ವಿಕಸಿತ ಭಾರತ ಸಂಕಲ್ಪ ಸಭೆ- ನವೀನ್ ನಾಯಕ್

ಕಾರ್ಕಳ ಬಿಜೆಪಿ ವತಿಯಿಂದ ವಿಕಾಸ ಜನಸೇವಾ ಕಛೇರಿಯಲ್ಲಿ ಜೂನ್ 16 ಬೆಳಿಗ್ಗೆ 10.00 ಗಂಟೆಗೆ ವಿಕಸಿತ ಭಾರತ ಸಂಕಲ್ಪ ಸಭೆಯನ್ನು ಆಯೋಜಿಸಲಾಗಿದೆ .

ಸ್ಲಾಬ್ ಪರಿಶೀಲನೆ ವೇಳೆ ಕ್ರೇನ್ ತೊಟ್ಟಿಲಿನಿಂದ ಆಯ ತಪ್ಪಿ ಬಿದ್ದು ಓರ್ವನ ಸಾವು, ಮಹಿಳೆ ಗಂಭೀರ

ಉಡುಪಿಯ ಕೋರ್ಟ್ ಹಿಂಭಾಗದ ಲೋಕೋಪಯೋಗಿ ಇಲಾಖೆ (PWD) ಕಚೇರಿ ಬಳಿ ನಡೆದ ಕ್ರೇನ್ ದುರ್ಘಟನೆ ಒಂದರಲ್ಲಿ ಹಿರಿಯ ನಾಗರಿಕರು ಸಾವಿಗೀಡಾಗಿದ್ದು, ಜೊತೆಗೆ ಮಹಿಳೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಕಿದಿಯೂರು ಶ್ಯಾಮಿಲಿ ಪಿ.ಯು. ಕಾಲೇಜಿನಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್(ರಿ.) ಉಡುಪಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಉಡುಪಿ ತಾಲೂಕು ಹಾಗೂ ಶ್ಯಾಮಿಲಿ ಪದವಿ ಪೂರ್ವ ಕಾಲೇಜು ಕಿದಿಯೂರು ಇವರ ಜಂಟಿ ಆಶ್ರಯದಲ್ಲಿ ಸ್ವಾಸ್ತ್ಯ ಸಂಕಲ್ಪ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಜರಗಿತು.