
ಬನ್ನಂಜೆ: ದಿನಾಂಕ 7 ಜನವರಿ 25 ಮಂಗಳವಾರ ಸಮಯ ಬೆಳಿಗ್ಗೆ 9 :00 ರಿಂದ ಸಂಜೆ 5:00 ರವರೆಗೆ ಬನ್ನಂಜೆ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಉಡುಪಿ ಡಿಸ್ಟ್ರಿಕ್ಟ್ ಫ್ಲೆಕ್ಸ್ ಪ್ರಿಂಟರ್ಸ್ ಅಸೋಸಿಯೇಷನ್(ರಿ) ಮತ್ತು ಉಡುಪಿ ಡಿಸ್ಟ್ರಿಕ್ಟ್ ಸೈನೇಜ್ ಅಸೋಸಿಯೇಷನ್ (ರಿ) ಇವರ ಜಂಟಿ ಸಹಭಾಗಿತ್ವದಲ್ಲಿ ಡಾಕ್-ಸೇವಾ; ಜನ್-ಸೇವಾ-ಅಂಚೆ ಜನ ಸಂಪರ್ಕ ಅಭಿಯಾನದಡಿ ಆಧಾರ್ ನೋಂದಣಿ ಹಾಗು ತಿದ್ದುಪಡಿ ಶಿಬಿರವನ್ನು ಉಡುಪಿ ಅಂಚೆ ಕಛೇರಿಯ ಸಹಾಯಕ ಅಧೀಕ್ಷಕ ಶ್ರೀಯುತ ಕೃಷ್ಣರಾಜ ವಿಠಲಭಟ್ ದೀಪ ಬೆಳಗಿಸುವುದರ ಮುಖೇನ ಉದ್ಘಾಟಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭಹಾರೈಸಿದರು..
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂಘದ ಗೌರವಾಧ್ಯಕ್ಷ ರಾದ ಶ್ರೀಯುತ ದಾಮೋದರ್ ಪೈ ಕುಂದಾಪುರ ರವರು ಕಾರ್ಯಕ್ರಮದ ಆಯೋಜನೆಯ ಉದ್ದೇಶದ ಕುರಿತು ಮಾಹಿತಿ ನೀಡಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಫ್ಲೆಕ್ಸ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀಯುತ ದಿನೇಶ್ ಎಂ ಕೆ ಮೂಡಬಿದ್ರೆ ಉಡುಪಿ ಜಿಲ್ಲಾ ಸೈನೇಜ್ ಅಸೋಸಿಯೇಶನ್ ಅಧ್ಯಕ್ಷರಾದ ಶ್ರೀಯುತ ರಾಜೇಶ್ ಕುಮಾರ್ ಅಂಬಾಡಿ ಉಪಸ್ಥಿತರಿದ್ದರು..
ಜಂಟಿ ಸಂಘದ ಸದಸ್ಯರು ಹಾಗೂ ಸಾರ್ವಜನಿಕರು ತಮ್ಮ ಹೊಸ ಆಧಾರ್ ನೋಂದಣಿ /ಪರಿಷ್ಕರಣೆ ಹಾಗೂ ಎಲ್ಲಾ ರೀತಿಯ ತಿದ್ದುಪಡಿಗಳ ಲಾಭ ಪಡೆದು, ಅಭಿಯಾನವನ್ನು ಯಶಸ್ವಿಗೊಳಿಸಿದರು.ಈ ಸಂದರ್ಭದಲ್ಲಿ ಪದಾಧಿಕಾರಿಗಳಾದ ಹರೀಶ್ ಕಡೆಕಾರ್, ರಿಜ್ವಾನ್ ಕಟಪಾಡಿ, ಸಂದೀಪ್ ಮಣಿಪಾಲ್, ಸಂತೋಷ್ ಬ್ರಹ್ಮಾವರ್, ರಾಜೇಶ್ ಬೆಳ್ಮಣ್, ಅಮೃತ್ ಸಾಲಿಗ್ರಾಮ, ಮಧುಸೂಧನ್ ಮಲ್ಪೆ, ಲ್ಯಾನ್ಸಿ ಕಲ್ಮಾಡಿ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀಯುತ ಹರೀಶ್ ಅಮೀನ್ ಸಂತೆಕಟ್ಟೆ ಸ್ವಾಗತಿಸಿ, ಸಂಘಟನಾ ಕಾರ್ಯದರ್ಶಿ ಯವರಾದ ಶ್ರೀಯುತ ಸುನೀಲ್ ಬ್ರಹ್ಮಾವರ ಧನ್ಯವಾದ ತಿಳಿಸಿದರು.