
ಕಾರ್ಕಳ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವ ವಿದ್ಯಾಲಯದಲ್ಲಿ ಶಶಿಕಲಾ ಮರಾಟೆಯವರಿಗೆ ನುಡಿ ನಮನ ಕಾರ್ಯಕ್ರಮ ಪೆಬ್ರವರಿ 23ರಂದು ಜರಗಿತು. ಸಮರ್ಪಣಾ ಭಾವ, ಕಲಿಯುವ ಹುಮ್ಮಸ್ಸು, ಸದಾ ನಗು ಮುಖ, ನಮ್ರತೆ, ಸದಾ ಸೇವಾಭಾವದಿಂದ ಮುಂದುವರಿಯುವಂತ ಶಶಿಕಲಾ ಮರಾಟೆಯವರ ನಿಧನವು ಮನೆಯವರಿಗೆ ತುಂಬಲಾಗದ ನಷ್ಟವೆಂದು ರಾಜಯೋಗಿನಿ ಬ್ರಹ್ಮಕುಮಾರಿ ವಿಜಯಲಕ್ಷ್ಮಿ ತಿಳಿಸಿದರು. ಸಮಾರಂಭದಲ್ಲಿ ಶಶಿಕಲಾರವರ ಪತಿ ರಮಾನಾಥ ಮರಾಟೆ , ಪುತ್ರ ಬ್ರಹ್ಮಾಂನಂದ ಮರಾಟೆ ಉಪಸಿತರಿದ್ದರು.