spot_img

100ಕ್ಕೂ ಹೆಚ್ಚು ಬೈಕ್ ಕದ್ದ ಕಿಲಾಡಿ ಕಳ್ಳನ ಸೆರೆ – 1.45 ಕೋಟಿ ಮೌಲ್ಯದ ವಾಹನ ವಶ!

Date:

ಬೆಂಗಳೂರು: ಕಳೆದ ಮೂರು ವರ್ಷಗಳಿಂದ ದುಬಾರಿ ಬೆಲೆಯ 100ಕ್ಕೂ ಹೆಚ್ಚು ಬೈಕ್ ಕದ್ದಿದ್ದ ಆಂಧ್ರಪ್ರದೇಶ ಮೂಲದ ಪ್ರಸಾದ್ ಬಾಬುವನ್ನು ಕೆಆರ್ ಪುರ ಪೊಲೀಸರು ಬಂಧಿಸಿದ್ದಾರೆ. ಈತನಿಂದ 1.45 ಕೋಟಿ ಮೌಲ್ಯದ 100 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆಂಧ್ರಪ್ರದೇಶದ ಬಂಗಾರುಪಾಳ್ಯಂ ನಿವಾಸಿಯಾಗಿರುವ ಪ್ರಸಾದ್ ಬಾಬು ಪ್ರತಿದಿನ ಸಂಜೆ ಬಸ್‌ನಲ್ಲಿ ಬೆಂಗಳೂರಿಗೆ ಬಂದು, ಕೆಆರ್ ಪುರ, ಟಿನ್ ಫ್ಯಾಕ್ಟರಿ, ಮಹದೇವಪುರ ಜನವಸತಿ ಪ್ರದೇಶಗಳಲ್ಲಿ ತಿರುಗಾಡುತ್ತಿದ್ದ. ಮನೆ ಮುಂದೆ ನಿಲ್ಲಿಸಿದ ದುಬಾರಿ ಬೆಲೆಯ ಬೈಕ್‌ಗಳ ಹ್ಯಾಂಡ್ ಲಾಕ್ ಮುರಿದು ಕಳ್ಳತನ ಮಾಡುತ್ತಿದ್ದ. ಕದ್ದ ದಿನವೇ ಬೈಕ್‌ನಲ್ಲಿ ಊರಿಗೆ ಪರಾರಿಯಾಗುತ್ತಿದ್ದ.

ಬೆಂಗಳೂರು, ತಿರುಪತಿ, ಚಿತ್ತೂರು ಸೇರಿ ಹಲವೆಡೆ ಪ್ರಸಾದ್ ಬಾಬು ಬೈಕ್ ಕಳ್ಳತನ ಮಾಡಿದ್ದ. ಕದ್ದ ವಾಹನಗಳನ್ನು 15-20 ಸಾವಿರಕ್ಕೆ ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ. ಈ ಹಣದಿಂದ ಮೋಜು ಮಸ್ತಿ ಮಾಡುತ್ತಿದ್ದ.

ಕೆಆರ್ ಪುರ ಪೊಲೀಸರು ಕಾರ್ಯಾಚರಣೆ ನಡೆಸಿ, 20 ರಾಯಲ್ ಎನ್‌ಫೀಲ್ಡ್, 30 ಫಲ್ಸರ್, 40 ಆಕ್ಟಿವಾ ಸೇರಿದಂತೆ ಒಟ್ಟು 100 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಒಂದು ಅನಾನಸಿನಲ್ಲಿ 13 ಗಿಡಗಳು! ಕಾರ್ಕಳದ ಮೆಜೆಸ್ಟಿಕ್ ಕ್ರಶರ್ ಕೈದೋಟದಲ್ಲಿ ಪ್ರಕೃತಿಯ ವಿಸ್ಮಯ

ಕಾರ್ಕಳದ ಗುಂಡ್ಯಡ್ಕದಲ್ಲಿರುವ ಮೆಜೆಸ್ಟಿಕ್ ಕ್ರಶರ್ ನ ಕೈದೋಟದಲ್ಲಿ ಕಂಡುಬಂದಿರುವ ಅನಾನಸು ಹಣ್ಣು ಇಲ್ಲಿನ ಎಲ್ಲರನ್ನೂ ಆಚ್ಚರಿಗೊಳಿಸಿದೆ.

ಯೋಗೇಶ್ ಗೌಡ ಹತ್ಯೆ ಪ್ರಕರಣ: ವಿನಯ್ ಕುಲಕರ್ಣಿಯ ಜಾಮೀನು ರದ್ದು ಪಡಿಸಿದ ಸುಪ್ರೀಂ ಕೋರ್ಟ್!

ಬಿಜೆಪಿ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ವಿನಯ್ ಕುಲಕರ್ಣಿಯ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ.

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರು

ಭಾರತೀಯ ಸೇನೆಗೆ ಆಯ್ಕೆಯಾದ ಬೈಲೂರಿನ ಸಾಗರ್ ಆಚಾರ್ಯರವರಿಗೆ ವಿಶ್ವಕರ್ಮ ಬ್ರಾಹ್ಮಣ ಸಮಾಜ ಸೇವಾ ಸಂಘ (ರಿ.) ನೀರೆ-ಬೈಲೂರುರವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ

ಪರ್ಕಳದಲ್ಲಿ ಮತ್ತೆ ಚಿರತೆ ಆತಂಕ: ಹಗಲೇ ಕೋಳಿ, ನಾಯಿ ಎಳೆದೊಯ್ದ ಘಟನೆ!

ಉಡುಪಿ ಜಿಲ್ಲೆಯ ಪರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿರತೆ ಪತ್ತೆಯಾಗಿರುವ ಘಟನೆ ಮತ್ತೆ ವರದಿಯಾಗಿದೆ.