
ಉಡುಪಿ : ಉಡುಪಿ ಜಿಲ್ಲೆಯ 80 ಬಡಗಬೆಟ್ಟುವಿನಲ್ಲಿರುವ ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ಜೀರ್ಣೋದ್ಧಾರ ಕಾರ್ಯಗಳು ಭರದಿಂದ ಸಾಗುತ್ತಿದ್ದು, ಈ ಪುಣ್ಯಕ್ಷೇತ್ರದ ಪುನರ್ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ವಿಶೇಷ 48 ದಿನಗಳ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಭಕ್ತಿ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿಯುವ ಈ ಭಜನಾ ಕಾರ್ಯಕ್ರಮವು 2026 ರ ಮಾರ್ಚ್ 7 ರಿಂದ ಏಪ್ರಿಲ್ 23 ರವರೆಗೆ ಸತತವಾಗಿ ನಡೆಯಲಿದೆ.
ಪ್ರತಿ ದಿನ ಸಾಯಂಕಾಲ 6:30 ರಿಂದ 8:00 ರವರೆಗೆ ನಡೆಯಲಿರುವ ಈ ಭಜನಾ ಸಂಕೀರ್ತನೆಯ ಶುಭಾರಂಭಕ್ಕೆ 80 ಬಡಗಬೆಟ್ಟುವಿನ ಮೂಡುಮನೆ ಶ್ರೀನಾಥ್ ಹೆಗ್ಡೆ ಅವರು ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಲಿದ್ದಾರೆ. ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಸಮ್ಮುಖದಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಭಕ್ತರಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬುವ ಗುರಿ ಹೊಂದಿದೆ. ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆಯುವ ಈ ಸಮಾರಂಭಕ್ಕೆ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ವಿನಂತಿಸಿದೆ.



































