spot_img

22ರ ಯುವಕನೊಂದಿಗೆ 50ರ ಮಹಿಳೆಯ ಮದುವೆ: ವೈರಲ್ ಆಗುತ್ತಿರುವ ವಿಚಿತ್ರ ಪ್ರೇಮ ಕಥೆ!

Date:

spot_img

ಪ್ರೀತಿಗೆ ವಯಸ್ಸಿನ ಮಿತಿ ಇಲ್ಲ ಎಂಬ ಮಾತು ಕೇವಲ ನುಡಿಮಾತಲ್ಲ, ಅದನ್ನು ಜೀವನದಲ್ಲಿ ಅಳವಡಿಸಿದ ಉದಾಹರಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. 50 ವರ್ಷದ ಮಹಿಳೆಯೊಬ್ಬರು ತಮಗಿಂತ 28 ವರ್ಷ ಕಿರಿಯನಾದ 22ರ ಯುವಕನನ್ನು ದೇವಾಲಯದಲ್ಲಿ ವಿವಾಹವಾಗಿರುವ ಘಟನೆ ಇದೀಗ ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ.

ಈ ವಿಚಿತ್ರ ಮದುವೆಯ ವಿಡಿಯೋ ಇನ್‌ಸ್ಟಾಗ್ರಾಮ್‌ನಲ್ಲಿ ವ್ಯಾಪಕವಾಗಿ ಹರಡಿದ್ದು, ಅದರಲ್ಲಿ ಇಬ್ಬರೂ ದೇವಾಲಯದ ಮುಂದೆ ನಿಂತು ಪರಸ್ಪರ ಹಾರ ಬದಲಾಯಿಸುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಮದುವೆಯಾದ ಖುಷಿಯು ಮಹಿಳೆಯ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದು, ತಲೆಯ ಮೇಲೆ ಕುಂಕುಮ, ಸಂತೋಷದಿಂದ ಮಂದಹಾಸ ಗೋಚರಿಸುತ್ತಿದೆ.

ವಿಡಿಯೋದಲ್ಲಿ ಸಂದರ್ಶಕನೊಬ್ಬ “ನಿಮ್ಮಿಬ್ಬರ ವಯಸ್ಸೆಷ್ಟು?” ಎಂದು ಕೇಳಿದಾಗ, ಮಹಿಳೆ ಯಾವುದೇ ಮುಜುಗುರವಿಲ್ಲದೆ ಧೈರ್ಯವಾಗಿ “ನನಗೆ 50, ಇವನಿಗೆ 22” ಎಂದು ನಗುತ್ತಲೇ ಉತ್ತರಿಸುತ್ತಾರೆ. ತಾವು ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದೆವು. ಪ್ರೀತಿಗೆ ವಯಸ್ಸಿನ ಬೇಧವಿಲ್ಲ, ಜಾತಿ ಧರ್ಮದ ಗಡಿ ಇಲ್ಲ. ಮನಸ್ಸುಗಳು ಒಂದಾದರೆ ಸಾಕು, ಮದುವೆ ಸಾಧ್ಯ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ವಿಡಿಯೋ ಈಗ ಜನಮನ ಸೆಳೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರೇಮ ಜೋಡಿಯ ಧೈರ್ಯದ ಬಗ್ಗೆ ಹೆಚ್ಚು ಚರ್ಚೆ ಮಾಡಲಾಗುತ್ತಿದೆ. ಕೆಲವರು ಅಚ್ಚರಿ ವ್ಯಕ್ತಪಡಿಸುತ್ತಿದ್ದರೆ, ಇನ್ನೂ ಕೆಲವರು ಇವರ ಈ ನಿರ್ಧಾರವನ್ನು ಗೌರವಿಸುತ್ತಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಾನಸಿಕ ಅಸ್ವಸ್ಥ ಯುವಕನ ರಕ್ಷಣೆ

ಕಸಕಡ್ಡಿ ಹಿಡಿಸೂಡಿ ಗೋಣಿ ಚೀಲದಲ್ಲಿ ತುಂಬಿಕೊಂಡು ಮಳೆಯಲ್ಲಿ ನೆನೆಯುತ್ತಾ ಅಮಾನವೀಯ ರೀತಿಯಲ್ಲಿದ್ದ ಹೊರ ರಾಜ್ಯದ ಮನೋರೋಗಿ ಯುವಕನನ್ನು ಮಂಜೇಶ್ವರ ಸ್ನೇಹಾಲಯ ಆಶ್ರಮಕ್ಕೆ ಪುನರ್ವಸತಿಗೆ ದಾಖಲಿಸಲಾಗಿದೆ.

ಮೊಸರು ಮತ್ತು ಬೆಳ್ಳುಳ್ಳಿ ಒಂದೇ ಬಟ್ಟಲಲ್ಲಿ – ಜೀರ್ಣಕ್ರಿಯೆಯಿಂದ ರೋಗನಿರೋಧಕ ಶಕ್ತಿ ವರೆಗೆ ಅನೇಕ ಆರೋಗ್ಯ ಲಾಭ!

ನಿತ್ಯ ಆಹಾರದಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೊಸರು ಮತ್ತು ಬೆಳ್ಳುಳ್ಳಿ ಜೊತೆಯಾಗಿ ಸೇವಿಸಿದರೆ, ಆಯುರ್ವೇದದ ಪ್ರಕಾರ ದೇಹಕ್ಕೆ ಅನೇಕ ರೀತಿಯಲ್ಲಿ ಲಾಭವಾಗುತ್ತದೆ.

ದೀಪಿಕಾ ಪಡುಕೋಣೆ ಹಾಲಿವುಡ್ ವಾಕ್ ಆಫ್ ಫೇಮ್ ಗೌರವಕ್ಕೆ ಭಾಜನೆ – 2026ರ ಪಟ್ಟಿಯಲ್ಲಿ ಭಾರತೀಯ ತಾರೆಗೂ ಸ್ಥಾನ!

ಭಾರತೀಯ ಚಿತ್ರರಂಗದ ಹೆಮ್ಮೆಯ ತಾರೆ ದೀಪಿಕಾ ಪಡುಕೋಣೆ ಇದೀಗ ಜಾಗತಿಕ ಮಟ್ಟದಲ್ಲಿ ಮತ್ತೊಂದು ಗೌರವಕ್ಕೆ ಪಾತ್ರರಾಗಿದ್ದಾರೆ. 2026ರ ಹಾಲಿವುಡ್ ವಾಕ್ ಆಫ್ ಫೇಮ್ – ಮೋಷನ್ ಪಿಕ್ಚರ್ಸ್ ವಿಭಾಗದಲ್ಲಿ ದೀಪಿಕಾಗೆ ಸ್ಟಾರ್ ಗೌರವ ಲಭಿಸುತ್ತಿದೆ.

ಪೊಲೀಸ್ ಅಧಿಕಾರಿಗೆ ಸಿಎಂ ಸಭೆಯಲ್ಲಿ ಅವಮಾನ : ಭರಮನಿ ನಿವೃತ್ತಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್

ಬೆಳಗಾವಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಸಾರ್ವಜನಿಕವಾಗಿ ಅವಮಾನಕ್ಕೊಳಗಾದ ಧಾರವಾಡದ ಎಎಸ್‌ಪಿ ನಾರಾಯಣ ಭರಮನಿ, ತೀವ್ರ ಅಸಹನೆ ವ್ಯಕ್ತಪಡಿಸಿ ಸ್ವಯಂ ನಿವೃತ್ತಿಗೆ ಮನವಿ ಸಲ್ಲಿಸಿದ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.