spot_img

ಥೈಲ್ಯಾಂಡ್‌ನಲ್ಲಿ ಅವಳಿ ಮಕ್ಕಳಿಗೆ ವಿಚಿತ್ರ ಮದುವೆ: ಹಿಂದಿನ ಜನ್ಮದ ನಂಟಿನ ನಂಬಿಕೆ!

Date:

spot_img

ಥೈಲ್ಯಾಂಡ್: ನಾಲ್ಕು ವರ್ಷದ ಅವಳಿ ಮಕ್ಕಳಿಗೆ ಪರಸ್ಪರ ಮದುವೆ ಮಾಡಿದಂತಹ ವಿಶಿಷ್ಟ ಘಟನೆಯೊಂದು ಥೈಲ್ಯಾಂಡ್‌ನಲ್ಲಿ ನಡೆದಿದ್ದು, ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಒಂದು ಹೆಣ್ಣು ಮತ್ತು ಒಂದು ಗಂಡು ಅವಳಿ ಮಕ್ಕಳಿಗೆ ಮದುವೆ ಮಾಡಿರುವ ಈ ವಿಡಿಯೋ ಅನೇಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ, ನಮ್ಮ ಸಂಸ್ಕೃತಿ ಸೇರಿದಂತೆ ಬಹುತೇಕ ಸಂಸ್ಕೃತಿಗಳಲ್ಲಿ ಅವಳಿಗಳನ್ನು ಸೋದರ-ಸೋದರಿಯರು ಎಂದು ಭಾವಿಸಲಾಗುತ್ತದೆ. ಅಣ್ಣ-ತಂಗಿ ಅಥವಾ ಅಕ್ಕ-ತಮ್ಮನ ನಡುವೆ ಮದುವೆ ನಿಷಿದ್ಧವಾಗಿರುವಂತೆ, ಅವಳಿಗಳ ನಡುವೆ ವಿವಾಹ ನಡೆಯುವುದಿಲ್ಲ. ಆದರೆ, ಥೈಲ್ಯಾಂಡ್‌ನಲ್ಲಿ ಒಂದೇ ತಾಯಿ ಗರ್ಭದಲ್ಲಿ ಜನಿಸಿದ ಅವಳಿಗಳಿಗೆ ಮದುವೆ ಮಾಡಿಸಲಾಗಿದೆ. ವೈರಲ್ ವಿಡಿಯೋದಲ್ಲಿ, ಅವಳಿಗಳು ಪರಸ್ಪರ ಹಾರ ಬದಲಾಯಿಸಿಕೊಂಡು ವಿವಾಹದ ಸಂಪ್ರದಾಯದಲ್ಲಿ ಭಾಗಿಯಾಗಿರುವುದು ಕಂಡುಬಂದಿದೆ.

ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ ಈ ಸಾಂಕೇತಿಕ ಮದುವೆಯ ಆಚರಣೆಯು ಒಂದು ಸಂಪ್ರದಾಯವಾಗಿದೆ. ರೆಸಾರ್ಟ್‌ನಲ್ಲಿ ನಡೆದ ಈ ಅದ್ದೂರಿ ಆಚರಣೆಯಲ್ಲಿ ಥಟ್ಯಾನಪೋರ್ನ್ ಸೋರ್ನ್ಚೆ ಮತ್ತು ಅವರ ಅವಳಿ ಸಹೋದರ ಥಟ್ಟಾಥಾರ್ನ್ ಪರಸ್ಪರ ಮದುವೆಯಾಗಿದ್ದಾರೆ. ಈ ಸಮಾರಂಭದಲ್ಲಿ ಹಲವಾರು ಬೌದ್ಧ ಸನ್ಯಾಸಿಗಳು ಭಾಗಿಯಾಗಿದ್ದು, ಪುಟ್ಟ ದಂಪತಿಗಳಿಗೆ ಆಶೀರ್ವದಿಸಿದ್ದಾರೆ. 4 ವರ್ಷದ ವಧು ತನ್ನ ಅವಳಿ ಸಹೋದರನಿಗೆ ಹಾರ ಹಾಕಿ, ಆತನ ಕೆನ್ನೆಗೆ ಮುತ್ತಿಕ್ಕಿ ವಿವಾಹದ ವಿಧಿ ವಿಧಾನಗಳನ್ನು ನೆರವೇರಿಸಿದ್ದಾಳೆ.

ಈ ಮದುವೆಯಲ್ಲಿ ಕುಟುಂಬದವರು ಸಾಂಪ್ರದಾಯಿಕ ವರದಕ್ಷಿಣೆ ಮೆರವಣಿಗೆಯನ್ನು ಕೂಡ ಆಯೋಜಿಸಿದ್ದರು. ಇದರಲ್ಲಿ ವಧುವಿಗೆ 4 ಮಿಲಿಯನ್ ಬಹ್ (ಅಂದಾಜು 1,05,58,228 ಭಾರತೀಯ ರೂಪಾಯಿ) ವರದಕ್ಷಿಣೆಯಾಗಿ ನೀಡಲಾಗಿದೆ.

ಥೈಲ್ಯಾಂಡ್‌ನಲ್ಲಿ ಅವಳಿಗಳಿಗೆ ಮದುವೆ ಏಕೆ? ಥೈಲ್ಯಾಂಡ್‌ನ ಬೌದ್ಧ ಧರ್ಮದಲ್ಲಿ, ಒಂದೇ ತಾಯಿ ಗರ್ಭದಲ್ಲಿ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳು ಜನಿಸಿದರೆ, ಅವರು ಹಿಂದಿನ ಜನ್ಮದಲ್ಲಿ ಪ್ರೇಮಿಗಳಾಗಿದ್ದರು ಎಂದು ನಂಬಲಾಗಿದೆ. ಹೀಗಾಗಿ, ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಬೇಗ ಮದುವೆ ಮಾಡದಿದ್ದರೆ ಅದು ದುರಾದೃಷ್ಟಕ್ಕೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಅವರ ಹಳೆಯ ಜನ್ಮದ ನಂಟಿನ ಜೊತೆಗೆ, ಮದುವೆಯಾಗದೇ ಹೋದರೆ ಅವರಿಗೆ ಅನಾರೋಗ್ಯ ಕಾಡುತ್ತದೆ ಮತ್ತು ಆಗಾಗ ಅವರು ಹುಷಾರು ತಪ್ಪಿ ಸಾಯಬಹುದು ಎಂಬ ಕಾರಣಕ್ಕೆ ಅವರಿಗೆ ಮದುವೆ ಮಾಡಲಾಗುತ್ತದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಪುತ್ತೂರು ವಿದ್ಯಾರ್ಥಿನಿ ಗರ್ಭಿಣಿ ಪ್ರಕರಣ: ಆರೋಪಿಯ ತಂದೆಗೆ ಜಾಮೀನು

ಸಹಪಾಠಿಯಿಂದ ವಿದ್ಯಾರ್ಥಿನಿ ತಾಯಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಗೆ ಆಶ್ರಯ ನೀಡಿದ ಆರೋಪದಡಿ ಬಂಧಿತರಾಗಿದ್ದ ಅವರ ತಂದೆ

ಕಾಂತರಗೋಳಿಯಲ್ಲಿ ಆನ್‌ಲೈನ್ ಜೂಜಾಟಕ್ಕೆ ಪೂರ್ಣವಿರಾಮ; 3 ಮಂದಿ ಸೆರೆ

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎರ್ಲಪಾಡಿ ಗ್ರಾಮದ ಕಾಂತರಗೋಳಿ ಬಸ್ ನಿಲ್ದಾಣದ ಬಳಿ ನಡೆಯುತ್ತಿದ್ದ ಅಕ್ರಮ ಆನ್‌ಲೈನ್ ಗೇಮಿಂಗ್ ಬೆಟ್ಟಿಂಗ್ ದಂಧೆಯ ಮೇಲೆ ಪೊಲೀಸರು ದಿಢೀರ್ ದಾಳಿ

ಗಣೇಶ ವಿಗ್ರಹ ಅಪಮಾನ ಪ್ರಕರಣ: ತಪ್ಪಿತಸ್ಥರ ಬಂಧನಕ್ಕೆ ಎಸ್ಪಿ ಮಿಥುನ್ ಕುಮಾರ್ ಭರವಸೆ

ಶಿವಮೊಗ್ಗ ನಗರದ ರಾಗಿಗುಡ್ಡ ಶಾಂತಿನಗರದ ಬಂಗಾರಪ್ಪ ಬಡಾವಣೆಯಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬರು ಗಣೇಶ ಮತ್ತು ನಾಗದೇವರ ಮೂರ್ತಿಗಳಿಗೆ ಅಪಮಾನವೆಸಗಿದ ಘಟನೆ ನಡೆದಿದೆ

ಮದ್ಯ ಸೇವಿಸಿ ಪೊಲೀಸರೊಂದಿಗೆ ಘರ್ಷಣೆ ಆರೋಪಿ ಬಂಧನ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ವ್ಯಕ್ತಿಯೋರ್ವನು, ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ