spot_img

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂದು ‘ಕ್ರೋಮಿಂಗ್’ ಸವಾಲಿಗೆ ಬಲಿಯಾದ 19 ವರ್ಷದ ಯುವತಿ

Date:

ಅರಿಜೋನಾ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ‘ಕ್ರೋಮಿಂಗ್’ ಅಥವಾ ‘ಧೂಳು ತೆಗೆಯುವ ಸವಾಲು’ (Dusting Challenge) ಪ್ರಾಣಪಾಯದ ಆಟವಾಗಿ ತಿರುಗಿದ್ದು, 19 ವರ್ಷದ ಯುವತಿ ರೇನಾ ಒ’ರೂರ್ಕ್ ಈ ಸವಾಲಿಗೆ ಬಲಿಯಾದ ದುರ್ಘಟನೆ ನಡೆದಿದೆ.

ರೆನಾ ತನ್ನ ತಂದೆಗೆ ಸದಾ “ಅಪ್ಪಾ, ನಾನು ಫೇಮಸ್ ಆಗ್ತೀನಿ. ನೀವು ನೋಡಿ ಹೆಮ್ಮೆ ಪಡ್ತೀರಾ” ಎಂದು ಹೇಳುತ್ತಿದ್ದಳು. ಸಾಮಾಜಿಕ ಮಾಧ್ಯಮಗಳಲ್ಲಿ ತಾನು ಪ್ರಸಿದ್ಧಳಾಗಬೇಕೆಂಬ ಕನಸಿನಲ್ಲಿ, ಆಕೆ ಕ್ರೋಮಿಂಗ್ ಎಂಬ ಅಪಾಯಕಾರಿ ಟ್ರೆಂಡ್‌ನ್ನು ಅನುಸರಿಸಿದ್ದಳು.

ಕ್ರೋಮಿಂಗ್ ಅಂದರೆ ಏನು?
ಕ್ರೋಮಿಂಗ್ ಎಂದರೆ ಏರೋಸಾಲ್ ಅಥವಾ ಇತರೆ ಕ್ಲೀನಿಂಗ್ ಸ್ಪ್ರೇಗಳನ್ನ ಉಸಿರಾಡುವುದು. ಇದರಿಂದ ತಾತ್ಕಾಲಿಕ ಉಲ್ಲಾಸ ಅಥವಾ ‘ಹೈ’ ಭಾವನೆ ಬರುತ್ತದೆ ಎಂಬ ನಂಬಿಕೆಯಿದೆ. ಆದರೆ ವೈದ್ಯಕೀಯವಾಗಿ ಇದು ಅತ್ಯಂತ ಮಾರಕ. ಕೆಮಿಕಲ್‌ನ ಪರಿಣಾಮದಿಂದ ತಕ್ಷಣದ ಹೃದಯಾಘಾತ, ಮೂಳೆಯ ಹಾನಿ, ಅಥವಾ ಉಸಿರಾಟದ ತೊಂದರೆ ಸಂಭವಿಸಬಹುದು ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ಘಟನೆಯ ವಿವರ:
ರೆನಾ ಮತ್ತು ಆಕೆಯ ಗೆಳೆಯನು ಎಸ್ರೋಸಾಲ್ ಕೀಬೋರ್ಡ್ ಕ್ಲೀನರ್ ಅನ್ನು ಆರ್ಡರ್ ಮಾಡಿ, ಕ್ರೋಮಿಂಗ್ ಪ್ರಯತ್ನಿಸಿದ್ದರು. ಈ ಕ್ರಿಯೆಯ ನಂತರ ರೇನಾಳಿಗೆ ತಕ್ಷಣವೇ ಹೃದಯಾಘಾತ ಸಂಭವಿಸಿದ್ದು, ಐಸಿಯುನಲ್ಲಿ ಒಂದು ವಾರ ಪ್ರಜ್ಞಾಹೀನವಾಗಿ ಉಳಿದು, ಕೊನೆಗೆ ಬ್ರೈನ್ ಡೆಡ್ ಎಂದು ಘೋಷಿಸಲಾಯಿತು.

ಆಕೆಯ ತಂದೆ ಆರನ್ ಒ’ರೂರ್ಕ್ ರವರು “ಅವಳು ಫೇಮಸ್ ಆಗಲಿಚ್ಚಿಸಿದ್ದಳು. ಆದರೆ ದುರದೃಷ್ಟವಶಾತ್, ಇಂದು ಆಕೆಯೇ ಇಲ್ಲ” ಎಂದು ಆಕ್ರಂದಿಸಿದ್ದಾರೆ. ಇಂತಹ ಟ್ರೆಂಡ್ಗಳ ಅಪಾಯವನ್ನು ತೀವ್ರವಾಗಿ ಅರಿತುಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ತಜ್ಞರ ಎಚ್ಚರಿಕೆ:
ಕ್ರೋಮಿಂಗ್ ಅಥವಾ ಧೂಳು ತೆಗೆಯುವ ಸವಾಲು ಯುವಜನರಲ್ಲಿ ಬೆಳೆದಿರುವ ಅಪಾಯಕಾರಿಯಾದ ಪ್ರವೃತ್ತಿ. ಮನೆಯಲ್ಲೇ ಲಭ್ಯವಿರುವ ಸಾಮಾನ್ಯ ಕ್ಲೀನಿಂಗ್ ಉತ್ಪನ್ನಗಳನ್ನು ದುರುಪಯೋಗಿಸುವುದು ಜೀವಕ್ಕೆ ಮಾರಕವಾಗಬಹುದು. ಈ ಕುರಿತಾಗಿ ಪೋಷಕರು ಮತ್ತು ಯುವಜನತೆ ಎಚ್ಚರಿಕೆ ವಹಿಸಬೇಕಾಗಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮುಂಬಯಿ ಉದ್ಯಮಿ ಕಾರ್ಕಳದ ಮಿಯ್ಯಾರಿನ ಶರತ್ ಶೆಟ್ಟಿ ಆತ್ಮಹತ್ಯೆ

ಮುಂಬಯಿಯಲ್ಲಿ ಹೋಟೆಲ್‌ ಉದ್ಯಮಿಯಾಗಿದ್ದ ಕಾರ್ಕಳ ತಾಲೂಕಿನ ಮಿಯಾರು ಗ್ರಾಮದ ರಾಜಬೆಟ್ಟು ನಿವಾಸಿ ಶರತ್ ಶೆಟ್ಟಿ (37) ಸೋಮವಾರ ಮುಂಜಾನೆ ಬಾವಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೇವಲ 180 ಮೀಟರ್‌ಗೆ ಓಲಾ ಬೈಕ್ ಬುಕಿಂಗ್ ಮಾಡಿದ ಯುವತಿ !

ಓಲಾ ಬೈಕ್ ಸೇವೆ ಸಾಮಾನ್ಯವಾಗಿ ದೂರದ ಪ್ರಯಾಣಕ್ಕಾಗಿಯೇ ಬಳಸಲಾಗುತ್ತದಾದರೂ, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಘಟನೆ ಒಂದರಲ್ಲಿ ಯುವತಿಯೊಬ್ಬಳು ಕೇವಲ 180 ಮೀಟರ್ ದೂರದ ಪ್ರಯಾಣಕ್ಕಾಗಿ ಓಲಾ ಬೈಕ್ ಬುಕಿಂಗ್ ಮಾಡಿರುವುದೇ ತಮಾಷೆಯ ಚರ್ಚೆಗೆ ಗ್ರಾಸವಾಗಿದೆ.

ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಕಾಲ್ತುಳಿತ ದುರಂತ: ಕ್ರೀಡಾಂಗಣ ಸ್ಥಳಾಂತರದ ಸಾಧ್ಯತೆ ಬಗ್ಗೆ ಸಿಎಂ ಚಿಂತನೆ

ಸಿ ಎಂ ಸಿದ್ದರಾಮಯ್ಯನವರು ಚಿನ್ನಸ್ವಾಮಿ ಕ್ರೀಡಾಂಗಣವನ್ನು ಭವಿಷ್ಯದಲ್ಲಿ ಸ್ಥಳಾಂತರಿಸುವ ಸಾಧ್ಯತೆಗಳನ್ನೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಹೇಳಿದರು. ಕ್ರೀಡಾಂಗಣದ ಸ್ಥಳವನ್ನು ಹೆಚ್ಚು ಸುರಕ್ಷಿತ, ಯೋಜಿತ ಸ್ಥಳಕ್ಕೆ ಸ್ಥಳಾಂತರಿಸುವ ಬಗ್ಗೆ ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ತಿಳಿಸಿದರು.

ಮರವಂತೆಯಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ! ಐದು ಪ್ರವಾಸಿಗರ ಪ್ರಾಣ ರಕ್ಷಣೆ

ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಸೆಲ್ಫಿ ಹುಚ್ಚಾಟ ಹಾಗೂ ಅಜಾಗ್ರತೆಯ ಪರಿಣಾಮವಾಗಿ ಐದು ಮಂದಿ ಸಮುದ್ರ ಪಾಲಾಗುವ ಹಂತಕ್ಕೆ ತಲುಪಿದ್ದರು. ಆದರೆ ಲೈಫ್ ಗಾರ್ಡ್‌ಗಳ ಸಮಯ ಪ್ರಜ್ಞೆ ಮತ್ತು ಸ್ಥಳೀಯರ ಸಹಕಾರದಿಂದ ಅವರನ್ನು ರಕ್ಷಿಸಲಾಯಿತು.