spot_img

ಶ್ರೀ ವ್ಯಾಸರಾಯರ ಆರಾಧನೆ

Date:

spot_img

ಪ್ರತಿಯೊಬ್ಬ ಕನ್ನಡಿಗರು ಕೂಡ ವ್ಯಾಸರಾಯರನ್ನು ನೆನಪಿಸಿಕೊಳ್ಳಬೇಕು. ಏಕೆಂದರೆ ಸಂಸ್ಕೃತ ಸಾಹಿತ್ಯವನ್ನು ಕನ್ನಡದಲ್ಲಿ ಹಾಡಿನ ಮೂಲಕ ಒದಗಿಸಿಕೊಟ್ಟ ಕೀರ್ತಿ ಮೊದಲಿಗೆ ವ್ಯಾಸರಾಯರಿಗೆ ಸಲ್ಲುತ್ತದೆ. ಅಷ್ಟೇ ಅಲ್ಲದೆ ವಿದ್ಯಾರಣ್ಯರಿಂದ ಸ್ಥಾಪಿಸಲ್ಪಟ್ಟ ಹಂಪೆಯ ದಿವ್ಯ ಸಿಂಹಾಸನವನ್ನು ಕೃಷ್ಣದೇವರಾಯನ ಕಾಲದಲ್ಲಿ ರಕ್ಷಿಸಿ, ಉಳಿಸಿ, ಬೆಳೆಸಿದ ಕೀರ್ತಿ ವ್ಯಾಸರಾಯರಿಗೆ ಸಲ್ಲುತ್ತದೆ. ಸುಮಾರು ೧೨ ವರ್ಷಗಳಷ್ಟು ಕಾಲ ತಿರುಪತಿಯ ಶ್ರೀನಿವಾಸನ ಆರಾಧನೆಯನ್ನು ಮಾಡಿದ್ದಾರೆ. ಸನ್ಯಾಸಿಯಾಗಿ, ರಾಜಗುರುವಾಗಿ, ತಿರುಪತಿಯ ಅರ್ಚಕನಾಗಿ, ಅಗಾಧವಾದ ಸಂಸ್ಕೃತ ಸಾಹಿತ್ಯದ ಜ್ಞಾನದಿಂದ ಕನ್ನಡದಲ್ಲಿ ಹಲವಾರು ಸಾಹಿತ್ಯಗಳನ್ನು ರಚಿಸಿ ಕನ್ನಡಾಂಬೆಯ ಸೇವೆ ಮಾಡಿದ ದಿವ್ಯ ಚೇತನ ಶ್ರೀ ವ್ಯಾಸರಾಯರು. ಸನ್ಯಾಸ ಜೀವನದ ಒಟ್ಟಿಗೆ ರಾಜ್ಯ ಹಾಗೂ ರಾಷ್ಟ್ರಗಳ ಸೇವೆಯನ್ನು ಮಾಡಿ ಇತಿಹಾಸದಲ್ಲಿ ಗುರುತಿಸಲ್ಪಟ್ಟ ಮಹಾ ಚೇತನ ನಮಗೆ ಆ ಚೈತನ್ಯವನ್ನು ಕೊಡಲಿ ಎಂದು ಪ್ರಾರ್ಥಿಸಿ ಈ ಆರಾಧನಾ ದಿನವನ್ನು ಸಾರ್ಥಕವಾಗಿಸೋಣ.

ಬರಹ: ಸಂತೋಷ್ ಕುಮಾರ್ ಭಟ್, ಮುದ್ರಾಡಿ

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಬೈಲೂರು ಪರಶುರಾಮ ಥೀಮ್ ಪಾರ್ಕ್ ಸ್ಥಗಿತಗೊಂಡ ಕಾಮಗಾರಿ ಯಾವಾಗ ? : ಸುಮಿತ್ ಶೆಟ್ಟಿ ಕೌಡೂರು

ಬೈಲೂರಿನ ಉಮಿಕ್ಕಲ್ ಬೆಟ್ಟದ ಮೇಲೆ ನಿರ್ಮಾಣವಾಗುತ್ತಿದ್ದ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್‌ನ ಕಾಮಗಾರಿಯು ಸ್ಥಗಿತಗೊಂಡಿರುವ ಕುರಿತು ಜಿ.ಪಂ. ಮಾಜಿ ಸದಸ್ಯ ಸುಮಿತ್ ಶೆಟ್ಟಿ ಕೌಡೂರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಳೆದ 5 ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರಿಂದ ಪೌರತ್ವ ತ್ಯಾಗ! : ವಿದೇಶಾಂಗ ಸಚಿವರಿಂದ ಮಾಹಿತಿ

ಕಳೆದ ಐದು ವರ್ಷಗಳಲ್ಲಿ 9 ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಸರ್ಕಾರ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಅತ್ಯಾಚಾರ ಆರೋಪ: ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ!

ಅತ್ಯಾಚಾರ ಆರೋಪ ಪ್ರಕರಣದಲ್ಲಿ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ಕಾರವಾರದಲ್ಲಿ ಎನ್‌ಐಟಿಕೆಯ ಬಿ.ಟೆಕ್ ವಿದ್ಯಾರ್ಥಿನಿ ಆತ್ಮಹತ್ಯೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನಲ್ಲಿ ತಾಲೂಕು ವೈದ್ಯಾಧಿಕಾರಿಯ ಪುತ್ರಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುರದೃಷ್ಟಕರ ಘಟನೆ ನಡೆದಿದೆ.