spot_img

2025 ನೇ ಪಂಚನಬೆಟ್ಟು ಶಾಲಾ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು

Date:

ಪಂಚನಬೆಟ್ಟು ಅನುದಾನಿತ ಖಾಸಗಿ ಹಿರಿಯ ಪ್ರಾಥಮಿಕ ಶಾಲೆ ಯ 2024-2025 ಸಾಲಿನ ಶಾಲಾ ವಾರ್ಷಿಕೋತ್ಸವವು ಪ್ರಾಥಮಿಕ ಶಾಲೆ ಮತ್ತು ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳ ಜಂಟಿ ಆಶ್ರಯದಲ್ಲಿ ದಿನಾಂಕ 11-01-2025 ಶನಿವಾರದಂದು ಶಾಲಾ ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಭಟ್ ನೆಕ್ಕರೆ ಪಲ್ಕೆ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಶಾಲಾ ಟ್ರಸ್ಟ್ ನ ಅಧ್ಯಕ್ಷರಾದ ಸುರೇಂದ್ರ ಆರ್ ನಾಯಕ್ ಮುಂಬಯಿ ರವರು ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕುಯಿಲಾಡಿ ಸುರೇಶ್ ನಾಯಕ್, ಟ್ರಸ್ಟಿ ವಿಶ್ವನಾಥ್ ಆರ್ ನಾಯಕ್ ರಾಮಕೃಷ್ಣ ನಾಯಕ್ ಚಾರಿಟೇಬಲ್ ಟ್ರಸ್ಟ್, ಮುಂಬಯಿ (ರಿ), ಬಾಲಕೃಷ್ಣ ಪ್ರಭು ಮಾಹೆ, ವಾಸುದೇವ ಪ್ರಭು ಮಾಹೆ, ಶಾಲಾ ಟ್ರಸ್ಟಿ ಯವರಾದ ಸಂತೋಷ್ ಕಾಮತ್, ಮಂಜುಳಾ ವಿ ರೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಹಾಗೂ ಶಾಲಾ ಟ್ರಸ್ಟಿ ಸತೀಶ್ ಬಿ ಶೆಟ್ಟಿಗಾರ್, ವಾರ್ಷಿಕೋತ್ಸವ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯಕ್ ಕುಳೆದು, ಶಾಲಾ ಮುಖ್ಯೋಪಾಧ್ಯಾಯರಾದ ಪಾಂಡುರಂಗ ನಾಯ್ಕ್ , ಆಡಳಿತ ಮಂಡಳಿ ಸದಸ್ಯರಾದ ನಿತ್ಯಾನಂದ ಪ್ರಭು, ಶ್ಯಾಮಲಾ ನಾಯ್ಕ್ ಮತ್ತು ಅಶ್ವಿನಿ ನಾಯ್ಕ್, ಶಾಲಾ ವಿದ್ಯಾರ್ಥಿ ನಾಯಕ ಸಂಚಯ್ ನಾಯ್ಕ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯರಾದ ಪಾಂಡುರಂಗ ನಾಯ್ಕ್ ಇವರಿಗೆ ಸನ್ಮಾನಿಸಿ, ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು.
ಶಾಲಾ ವಿದ್ಯಾರ್ಥಿಗಳು, ಪೋಷಕರು ಮತ್ತು ಹಳೆ ವಿದ್ಯಾರ್ಥಿ ಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅಭಿನಯ ಕಲಾವಿದರು ಉಡುಪಿ ಇವರಿಂದ ಬರಂದೇ ಕುಲ್ಲಯೇ ನಾಟಕವು ಯಶಸ್ವಿಯಾಗಿ ನಡೆಯಿತು.
ಶಾಲಾ ಹಳೆವಿದ್ಯಾರ್ಥಿ ಯವರಾದ ಸಂದೇಶ್ ಕುಲಾಲ್‌ ಮತ್ತು ರಾಜೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿ ಟ್ರಸ್ಟಿ ಸಂತೋಷ್ ಕಾಮತ್‌ ವಂದಿಸಿದರು.

ಸಹ ಶಿಕ್ಷಕ/ಶಿಕ್ಷಕಿಯರು, ಪೋಷಕರು, ಹಳೇವಿದ್ಯಾರ್ಥಿಗಳು, ಶಾಲಾ ವಿದ್ಯಾಭಿಮಾನಿಗಳು ಊರವರ ಸಹಕಾರದಿಂದ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದು ಪ್ರಕಟಣೆಯೆಲ್ಲಿ ತಿಳಿಸಲಾಗಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹಸಿರು ದ್ರಾಕ್ಷಿಯ 6 ಮಹತ್ವದ ಆರೋಗ್ಯ ಲಾಭಗಳು!

ಸಿಹಿ ಮತ್ತು ಸ್ವಲ್ಪ ಹುಳಿ ರುಚಿಯೊಂದಿಗೆ, ದ್ರಾಕ್ಷಿ ಹಣ್ಣು ಆರೋಗ್ಯಕ್ಕೆ ಅತ್ಯಂತ ಲಾಭದಾಯಕವೆಂಬುದು ತಜ್ಞರ ಅಭಿಪ್ರಾಯ. ಪೌಷ್ಟಿಕತೆಯಿಂದ ಸಮೃದ್ಧವಾಗಿರುವ ಈ ಹಣ್ಣು ದೇಹದ ವಿವಿಧ ಅಂಗಾಂಗಗಳಿಗೆ ಬಲ ನೀಡುತ್ತಿದ್ದು, ಹಲವಾರು ಆರೋಗ್ಯ ಸಮಸ್ಯೆಗಳನ್ನು ತಡೆಯುವಲ್ಲಿ ಸಹಕಾರಿ.

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ತಿರುಗುಬಾಣ

ಆರ್‌ಸಿಬಿ ಕಪ್ ಗೆದ್ದ ಖುಷಿಯಲ್ಲಿ ಟ್ವೀಟ್‌ ಮಾಡಿದ ವಿಜಯ್ ಮಲ್ಯಗೆ ಎಸ್‌ಬಿಐ ನಗುಮುಖದ ಇಮೋಜಿಯೊಂದಿಗೆ ಪ್ರತಿಕ್ರಿಯಿಸಿದೆ.

ಬೆವರಿಲ್ಲದೇ ಲಕ್ಷಾಂತರ ರೂಪಾಯಿ ಗಳಿಕೆ: ಮುಂಬೈನ ಆಟೋ ಚಾಲಕನ ಸ್ಮಾರ್ಟ್ ಐಡಿಯಾ

ಹೆಚ್ಚುವರಿ ಶ್ರಮವಿಲ್ಲದೇ ದುಡ್ಡು ಗಳಿಸುವವರ ಕಥೆಗಳು ಅಪರೂಪ, ಆದರೆ ಮುಂಬೈನ ಆಟೋ ಚಾಲಕನೊಬ್ಬ ತನ್ನ ಚತುರತನದಿಂದ ದಿನಕ್ಕೆ ಸಾವಿರಾರು ರೂ. ಗಳಿಸುತ್ತಿರುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಗ್ರಾಮ ಪಂಚಾಯತ್ ವ್ಯಾಪ್ತಿಗೂ ರೆರಾ ಕಡ್ಡಾಯ

ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿಯೂ ಬಡಾವಣೆ ಅನುಮೋದನೆಗೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ (ರೆರಾ) ನೋಂದಣಿಯನ್ನು ಕಡ್ಡಾಯಗೊಳಿಸಿ ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ.