
ಕುಕ್ಕುಂದೂರು : ಆರೋಗ್ಯ & ಕ್ಷೇಮ ಮಂದಿರ ಕುಕ್ಕುಂದೂರು ಬಿ. ಹಾಗೂ ವಿಜೇತ ವಿಶೇಷ ಶಾಲೆ ಸಹಯೋಗದಲ್ಲಿ ವಿಜೇತ ವಿಶೇಷ ಶಾಲಾ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರ ಬಿಪಿ ಶುಗರ್ ಹಾಗೂ HIV ಮತ್ತು ಇನ್ಫೆಕ್ಷನ್ ಗಳಿಗೆ ಸಂಬಂಧಿಸಿದಂತೆ ಉಚಿತವಾಗಿ ಆರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ನಿಟ್ಟೆ ಆಪ್ತ ಸಮಲೋಚಕರಾದ ದಿನೇಶ್, ಸಮುದಾಯ ಆರೋಗ್ಯ ಕೇಂದ್ರ ನಿಟ್ಟೆ ಪ್ರಯೋಗ ಶಾಲಾ ತಜ್ಞರಾದ ಸುದರ್ಶನ್, ನಕ್ರೆ ಹಾಸ್ಪಿಟಲ್ ನ ಸಿ ಹೆಚ್ ಓ ಸ್ವಾತಿ, ಪಿ ಹೆಚ್ ಸಿ ಓ ಅನಿತಾ, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್ ಹಾಗೂ ಆಶಾ ಕಾರ್ಯಕರ್ತೆಯರಾದ ಸೌಮ್ಯ ಮತ್ತು ಅಂಬಿಕಾ ಉಪಸ್ಥಿತರಿದ್ದರು.

