spot_img

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Date:

spot_img

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ|(2-11) ಶ್ರೀಕೃಷ್ಣ ದುಃಖ ಪಡಬಾರದೆಂದವನಲ್ಲ. ದುಃಖಪಡಬಾರದ್ದಕ್ಕೆ ದುಃಖ ಪಡಬಾರದು- ಇದು ಶ್ರೀಕೃಷ್ಣನ ಮೊತ್ತ ಮೊದಲ ಉದ್ಗಾರ. ದುಃಖಪಡಬೇಕಾದ್ದಕ್ಕೆ ದುಃಖಪಡಬೇಕು. ಎಲ್ಲಿ ಬೇರೆಯವರಿಗೆ ಕಷ್ಟವಾಗುತ್ತದೋ ಅಲ್ಲಿ ದುಃಖ ಪಡಬೇಕು.

“ಪ್ರಜ್ಞಾವಾದಾಂತ’ ಎಂದು ಹೇಳುವ ಬದಲು ಬಹುವಚನ (ಪ್ರಜ್ಞಾವಾದಾಂಶ್ಚ) ಹೇಳಿದ್ದೇಕೆ? ಅರ್ಜುನನ ಪ್ರತಿವಾದಕ್ಕೂ ವಿರುದ್ಧಾರ್ಥಗಳಿವೆ. ಅನೇಕ ವಾದಗಳಿವೆ. ಸ್ಥಿರವಾದಗಳಿಲ್ಲ. ಹಿಂದಿನ ಮಾತಿಗೂ ಮುಂದಿನ ಮಾತಿಗೂ ಸಂಬಂಧವಿಲ್ಲ. ಪ್ರಜ್ಞಾ =ತಿಳಿದುಕೊಂಡವ. ಆದರೆ ವಾಸ್ತವದಲ್ಲಿ ಅರ್ಜುನ ಹಾಗಿಲ್ಲ. “ತುಂಬ ತಿಳಿದುಕೊಂಡವರ ಹಾಗೆ’ ಅರ್ಜುನನಿದ್ದ. ವಾದವನ್ನು ಮಾಡು ಎಂದು ಹೇಳುವುದೇ ವಿನಾ ವಾದವನ್ನು ಹೇಳು ಎಂದು ಹೇಳುವುದಿಲ್ಲ. ನೀನು ಭಾಷಣ ಮಾಡುತ್ತಿದ್ದೀ (ಭಾಷಸೇ) ಎನ್ನುತ್ತಾನೆ.

ಭಾಷಣವೆಂದರೆ ಇನ್ನೊಬ್ಬರಿಗೆ ಮರಳಾಗುವಂತೆ ಮಾತನಾಡುವುದು. ನಿಜವಾಗಿ ಅಲ್ಲಿ ಶಕ್ತಿ ಇಲ್ಲ. ಪ್ರಜ್ಞಾವಾದವೆಂದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಎಂಬರ್ಥವೂ ಇದೆ. ಮನುಷ್ಯನ ದೋಷ ತನಗೆ ತೋರಿದ್ದೇ ಪರಮಪ್ರಮಾಣ ಎಂದು ತಿಳಿಯುವುದು. ನನ್ನ ಮನಸ್ಸಿಗೆ ಬಂದದ್ದೇ ಸರಿ ಎಂದು ತಿಳಿದರೆ ಸತ್ಯ ಕಾಣುವುದಿಲ್ಲ. ಮೋಹಕ್ಕೆ ಒಳಗಾಗುವುದು ಸಹಜ, ಅದರಿಂದ ಹೊರಬರುವುದೂ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇರುವತ್ತೂರು ಕೊಳಕೆ ಶಾಲಾ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗದಿಂದ ಕೊಡೆ, ಕಲಿಕಾ ಸಾಮಗ್ರಿ ವಿತರಣೆ

ಇರುವತ್ತೂರು ಕೊಳಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆನಂದ್ ಸರ್ ಅಭಿಮಾನಿ ಶಿಷ್ಯರ ಬಳಗ, ಕುಂದಾಪುರ ವತಿಯಿಂದ ಸುಮಾರು ₹20,000 ಮೌಲ್ಯದ ಕೊಡೆಗಳು ಮತ್ತು ಕಲಿಕಾ ಸಾಮಗ್ರಿಗಳನ್ನು ವಿತರಿಸಲಾಯಿತು.

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು : ಸಂಧ್ಯಾ ರಮೇಶ್

ಪರಶುರಾಮ ಮೂರ್ತಿ ಬಗ್ಗೆ ಅಪಪ್ರಚಾರಗೈದ ಕಾಂಗ್ರೆಸ್ ಮುಖಂಡ ಉದಯ ಕುಮಾರ್ ಶೆಟ್ಟಿ ಮತ್ತು ಅವರ ತಂಡ ಜಿಲ್ಲೆಯ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಂಧ್ಯಾ ರಮೇಶ್ ತಿಳಿಸಿದ್ದಾರೆ.

“ಬಿಜೆಪಿಗೆ ಧೈರ್ಯವಿದ್ದರೆ ದಲಿತರನ್ನು ಪ್ರಧಾನಿ ಮಾಡಿ”: ವಿಜಯೇಂದ್ರಗೆ ಸಿಎಂ ಸಿದ್ದರಾಮಯ್ಯ ಸವಾಲು!

ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಂತೆ ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತೀಕ್ಷ್ಣ ತಿರುಗೇಟು ನೀಡಿದ್ದಾರೆ.

ಫೋನ್ ಪಾಸ್‌ವರ್ಡ್ ನೀಡುವಂತೆ ಪತ್ನಿಗೆ ಒತ್ತಾಯಿಸುವಂತಿಲ್ಲ: ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು!

ಪತ್ನಿಯ ಮೊಬೈಲ್ ಫೋನ್ ಪಾಸ್‌ವರ್ಡ್ ಅಥವಾ ಬ್ಯಾಂಕ್ ಖಾತೆ ವಿವರಗಳನ್ನು ಹಂಚಿಕೊಳ್ಳುವಂತೆ ಒತ್ತಾಯಿಸುವುದು ಆಕೆಯ ಗೌಪ್ಯತೆಯ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ