spot_img

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Date:

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ|(2-11) ಶ್ರೀಕೃಷ್ಣ ದುಃಖ ಪಡಬಾರದೆಂದವನಲ್ಲ. ದುಃಖಪಡಬಾರದ್ದಕ್ಕೆ ದುಃಖ ಪಡಬಾರದು- ಇದು ಶ್ರೀಕೃಷ್ಣನ ಮೊತ್ತ ಮೊದಲ ಉದ್ಗಾರ. ದುಃಖಪಡಬೇಕಾದ್ದಕ್ಕೆ ದುಃಖಪಡಬೇಕು. ಎಲ್ಲಿ ಬೇರೆಯವರಿಗೆ ಕಷ್ಟವಾಗುತ್ತದೋ ಅಲ್ಲಿ ದುಃಖ ಪಡಬೇಕು.

“ಪ್ರಜ್ಞಾವಾದಾಂತ’ ಎಂದು ಹೇಳುವ ಬದಲು ಬಹುವಚನ (ಪ್ರಜ್ಞಾವಾದಾಂಶ್ಚ) ಹೇಳಿದ್ದೇಕೆ? ಅರ್ಜುನನ ಪ್ರತಿವಾದಕ್ಕೂ ವಿರುದ್ಧಾರ್ಥಗಳಿವೆ. ಅನೇಕ ವಾದಗಳಿವೆ. ಸ್ಥಿರವಾದಗಳಿಲ್ಲ. ಹಿಂದಿನ ಮಾತಿಗೂ ಮುಂದಿನ ಮಾತಿಗೂ ಸಂಬಂಧವಿಲ್ಲ. ಪ್ರಜ್ಞಾ =ತಿಳಿದುಕೊಂಡವ. ಆದರೆ ವಾಸ್ತವದಲ್ಲಿ ಅರ್ಜುನ ಹಾಗಿಲ್ಲ. “ತುಂಬ ತಿಳಿದುಕೊಂಡವರ ಹಾಗೆ’ ಅರ್ಜುನನಿದ್ದ. ವಾದವನ್ನು ಮಾಡು ಎಂದು ಹೇಳುವುದೇ ವಿನಾ ವಾದವನ್ನು ಹೇಳು ಎಂದು ಹೇಳುವುದಿಲ್ಲ. ನೀನು ಭಾಷಣ ಮಾಡುತ್ತಿದ್ದೀ (ಭಾಷಸೇ) ಎನ್ನುತ್ತಾನೆ.

ಭಾಷಣವೆಂದರೆ ಇನ್ನೊಬ್ಬರಿಗೆ ಮರಳಾಗುವಂತೆ ಮಾತನಾಡುವುದು. ನಿಜವಾಗಿ ಅಲ್ಲಿ ಶಕ್ತಿ ಇಲ್ಲ. ಪ್ರಜ್ಞಾವಾದವೆಂದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಎಂಬರ್ಥವೂ ಇದೆ. ಮನುಷ್ಯನ ದೋಷ ತನಗೆ ತೋರಿದ್ದೇ ಪರಮಪ್ರಮಾಣ ಎಂದು ತಿಳಿಯುವುದು. ನನ್ನ ಮನಸ್ಸಿಗೆ ಬಂದದ್ದೇ ಸರಿ ಎಂದು ತಿಳಿದರೆ ಸತ್ಯ ಕಾಣುವುದಿಲ್ಲ. ಮೋಹಕ್ಕೆ ಒಳಗಾಗುವುದು ಸಹಜ, ಅದರಿಂದ ಹೊರಬರುವುದೂ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ನಾರಾಯಣ ಗುರು ಜಯಂತಿ

ಜ್ಞಾನ ಮತ್ತು ಸಮಾನತೆಯ ಪುನರುತ್ಥಾನಕ್ಕೆ ಪ್ರೇರಣೆಯ ದಿನಪ್ರತಿ ವರ್ಷ ಸೆಪ್ಟೆಂಬರ್ 7, ಭಾರತದ ಕರಾವಳಿ ತೀರದ ಜನತೆಗೆ ಒಂದು ಪವಿತ್ರ ಮತ್ತು ಮಹತ್ವದ ದಿನ

ಧರ್ಮಸ್ಥಳ ಪ್ರಕರಣ: ಆರೋಪಿ ಚಿನ್ನಯ್ಯ ನ್ಯಾಯಾಂಗ ಬಂಧನಕ್ಕೆ, ಶಿವಮೊಗ್ಗ ಜೈಲಿಗೆ ರವಾನೆ

'ಧರ್ಮಸ್ಥಳದಲ್ಲಿ ಹೆಣ ಹೂತಿದ್ದೇನೆ' ಎಂದು ಹಲವು ದಿನಗಳ ಕಾಲ ಸುದ್ದಿಯಲ್ಲಿದ್ದ ಆರೋಪಿ ಚಿನ್ನಯ್ಯನ ಎಸ್.ಐ.ಟಿ ಕಸ್ಟಡಿ ಅವಧಿ ಮುಗಿದಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಐಸಿಸಿ ಮತ್ತು Google Pay ಜಂಟಿ ಪ್ರಯತ್ನ: ಮಹಿಳಾ ವಿಶ್ವಕಪ್ ಟಿಕೆಟ್ ಮಾರಾಟಕ್ಕೆ ಹೊಸ ಡಿಜಿಟಲ್ ಸ್ಪರ್ಶ

ವಿಶೇಷ ಟಿಕೆಟ್‌ಗಳು ಗೂಗಲ್ ಪೇ ಮೂಲಕ ಸೆಪ್ಟೆಂಬರ್ 8ರವರೆಗೆ ಲಭ್ಯವಿರಲಿದ್ದು, ಸೆಪ್ಟೆಂಬರ್ 9 ರಿಂದ ಎಂದಿನಂತೆ ಟಿಕೆಟ್ ಮಾರಾಟ ಪ್ರಾರಂಭವಾಗಲಿದೆ ಎಂದು ICC ತಿಳಿಸಿದೆ.

ಸೈನಸ್ ಸಮಸ್ಯೆ: ಕರಿಮೆಣಸಿನ ಆವಿಯಿಂದ ಪರಿಹಾರ ಸಾಧ್ಯವೇ?

ಮೂಗು ಕಟ್ಟಿಕೊಂಡಾಗ ಅಥವಾ ಸೈನಸ್‌ಗಳಿಂದ ತಲೆನೋವು ಬಂದಾಗ ಬಿಸಿ ನೀರಿನ ಆವಿಗೆ ಕರಿಮೆಣಸು ಸೇರಿಸಿ ಉಸಿರಾಡುವುದು ಒಂದು ಜನಪ್ರಿಯ ವಿಧಾನ.