spot_img

Udupi: ಗೀತಾರ್ಥ ಚಿಂತನೆ-99: ತಿಳಿದುಕೊಂಡವರ ಹಾಗಿದ್ದ ಅರ್ಜುನ

Date:

ಅಶೋಚ್ಯಾನನ್ವಶೋಚಸ್ತ್ವಂ ಪ್ರಜ್ಞಾವಾದಾಂಶ್ಚ ಭಾಷಸೇ|(2-11) ಶ್ರೀಕೃಷ್ಣ ದುಃಖ ಪಡಬಾರದೆಂದವನಲ್ಲ. ದುಃಖಪಡಬಾರದ್ದಕ್ಕೆ ದುಃಖ ಪಡಬಾರದು- ಇದು ಶ್ರೀಕೃಷ್ಣನ ಮೊತ್ತ ಮೊದಲ ಉದ್ಗಾರ. ದುಃಖಪಡಬೇಕಾದ್ದಕ್ಕೆ ದುಃಖಪಡಬೇಕು. ಎಲ್ಲಿ ಬೇರೆಯವರಿಗೆ ಕಷ್ಟವಾಗುತ್ತದೋ ಅಲ್ಲಿ ದುಃಖ ಪಡಬೇಕು.

“ಪ್ರಜ್ಞಾವಾದಾಂತ’ ಎಂದು ಹೇಳುವ ಬದಲು ಬಹುವಚನ (ಪ್ರಜ್ಞಾವಾದಾಂಶ್ಚ) ಹೇಳಿದ್ದೇಕೆ? ಅರ್ಜುನನ ಪ್ರತಿವಾದಕ್ಕೂ ವಿರುದ್ಧಾರ್ಥಗಳಿವೆ. ಅನೇಕ ವಾದಗಳಿವೆ. ಸ್ಥಿರವಾದಗಳಿಲ್ಲ. ಹಿಂದಿನ ಮಾತಿಗೂ ಮುಂದಿನ ಮಾತಿಗೂ ಸಂಬಂಧವಿಲ್ಲ. ಪ್ರಜ್ಞಾ =ತಿಳಿದುಕೊಂಡವ. ಆದರೆ ವಾಸ್ತವದಲ್ಲಿ ಅರ್ಜುನ ಹಾಗಿಲ್ಲ. “ತುಂಬ ತಿಳಿದುಕೊಂಡವರ ಹಾಗೆ’ ಅರ್ಜುನನಿದ್ದ. ವಾದವನ್ನು ಮಾಡು ಎಂದು ಹೇಳುವುದೇ ವಿನಾ ವಾದವನ್ನು ಹೇಳು ಎಂದು ಹೇಳುವುದಿಲ್ಲ. ನೀನು ಭಾಷಣ ಮಾಡುತ್ತಿದ್ದೀ (ಭಾಷಸೇ) ಎನ್ನುತ್ತಾನೆ.

ಭಾಷಣವೆಂದರೆ ಇನ್ನೊಬ್ಬರಿಗೆ ಮರಳಾಗುವಂತೆ ಮಾತನಾಡುವುದು. ನಿಜವಾಗಿ ಅಲ್ಲಿ ಶಕ್ತಿ ಇಲ್ಲ. ಪ್ರಜ್ಞಾವಾದವೆಂದರೆ ಮನಸ್ಸಿಗೆ ಬಂದಂತೆ ಮಾತನಾಡುವುದು ಎಂಬರ್ಥವೂ ಇದೆ. ಮನುಷ್ಯನ ದೋಷ ತನಗೆ ತೋರಿದ್ದೇ ಪರಮಪ್ರಮಾಣ ಎಂದು ತಿಳಿಯುವುದು. ನನ್ನ ಮನಸ್ಸಿಗೆ ಬಂದದ್ದೇ ಸರಿ ಎಂದು ತಿಳಿದರೆ ಸತ್ಯ ಕಾಣುವುದಿಲ್ಲ. ಮೋಹಕ್ಕೆ ಒಳಗಾಗುವುದು ಸಹಜ, ಅದರಿಂದ ಹೊರಬರುವುದೂ ಅಗತ್ಯ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಸ್ಥಾನದಲ್ಲಿ ಮನ್ಮಹಾರಥೋತ್ಸವ

ದಿನಾಂಕ 2025 ಏಪ್ರಿಲ್ 14ರಿಂದ 19ರ ವರೆಗೆ ಅಜೆಕಾರು ಶ್ರೀ ಮಹಾವಿಷ್ಣು ಮೂರ್ತಿ ದೇವಳದಲ್ಲಿ ಧ್ವಜಾರೋಹಣದಿಂದ ಆರಂಭವಾಗಿ ಶ್ರೀ ಮನ್ಮಹಾರಥೋತ್ಸವದವರೆಗೆ ವಿವಿಧ ಧಾರ್ಮಿಕ ಆಚರಣೆಗಳು ಜರುಗಲಿವೆ.

ಹಿಂದೂಕುಶ್‌ನಲ್ಲಿ 5.9 ತೀವ್ರತೆಯ ಭೂಕಂಪ: ದೆಹಲಿಯವರೆಗೂ ಕಂಪಿಸಿದ ಭೂಮಿ!

ಬುಧವಾರ ಬೆಳಗಿನ ಜಾವ ಅಫ್ಘಾನಿಸ್ತಾನದ ಹಿಂದೂ ಕುಶ್ ಪರ್ವತಶ್ರೇಣಿಯಲ್ಲಿ ಸಂಭವಿಸಿದ 5.9 ತೀವ್ರತೆಯ ಭೂಕಂಪದ ಪರಿಣಾಮ, ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದ ಹಲವು ಭಾಗಗಳಲ್ಲಿ ಭೂಮಿ ಕಂಪಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ಮಾಹಿತಿ ನೀಡಿದೆ.

ಬೀಡಿ ಕಾರ್ಮಿಕರ ಆಕ್ರೋಶ: ವೇತನ ಕಡಿತ ವಿರೋಧಿಸಿ ಉಡುಪಿಯಲ್ಲಿ ಆದೇಶ ಪ್ರತಿಗೆ ಬೆಂಕಿ!

ಬೀಡಿ & ಟೋಬ್ಯಾಕೋ ಲೇಬರ್ ಯೂನಿಯನ್ ನೇತ್ರತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಉಡುಪಿ ತಹಶಿಲ್ದಾರರ ಕಛೇರಿ ಎದುರು ಸರ್ಕಾರದ ಆದೇಶ ಪ್ರತಿಗೆ ಬೆಂಕಿ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಮದುವೆಗೆ ನೀಡಲಾದ ಐಷಾರಾಮಿ ಉಡುಗೊರೆಗಳ ವಿಡಿಯೋ ವೈರಲ್ ಮಾಡಿದ ವರ !

ಮದುವೆಯ ಹೆಸರಿನಲ್ಲಿ ನೀಡಲಾದ ಭರ್ಜರಿ ಉಡುಗೊರೆಗಳಾದ ಕಾರು, ಬೈಕ್, ಚಿನ್ನಾಭರಣ, ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳನ್ನು ಒಂದೇ ಸ್ಥಳದಲ್ಲಿ ಪ್ರದರ್ಶನಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.